ವಚನ - 272     
 
ಊರೂರ ಮಧ್ಯದಲಿ ಆತನಿಪ್ಪರಮನೆಯ ಆರು ಅರಿಯರು ಆರು ದ್ವಾರಂಗಳ. ಅಂಗ ಲಿಂಗದಲ್ಲಿದ್ದು ಸಂಗವಂ ತೊರೆದೀಗ ಸುಸಂಗ ಸಾನಂದವಾದವರರಿಯರು. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಿಪ್ಪರ ಮನೆ ಈ ಪರಿಯಯ್ಯಾ.