ವಚನ - 271     
 
ಉಸುರುಸುರ ಸರಹಿನೊಳಗಡಗಿಕೊಂಡು ಬೆಳೆವುತಿಪ್ಪುದು ಲೋಕ! ಇದನು ನೀನೆಂತು ಅರಿದೆ ಹೇಳಾ. ಆ ನಿನ್ನ ಪ್ರಸಾದದಿಂದರಿತೆ ನಾ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.