ವಚನ - 274     
 
ಎಂಟು ಬೆಟ್ಟದ ಮೇಲೆ ಸುಡೆಯರು ಬಂದು, ನಂಟುಗಂಡೆವೆಂದು ವರ್ಗಂಗಳಾ ಕಂಠಸ್ವರದಿಂದವೆ ಮಧುರಗೀತವ ಮಾಡೆ, ನಂಟು ಮುರಿಯಿತ್ತೀಗ ಆ ಪರಲೋಕ. ತನುತ್ರಯದ ಮಲತ್ರಯವ ಸುಟ್ಟು ಲಿಂಗತ್ರಯವ ನೆಲೆಗೊಳಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.