ವಚನ - 275     
 
ಎಂಟು ಮೂರ್ತಿಯಲ್ಲಾದ ಆನಂದ ತಾ ನೀನಲ್ಲ ಎಂಟರಂತಿಪ್ಪೆ ಎಲೆ ಸದ್ಬೋಧದಾ ಮೂರರಲಿ ಭವಿಸೀಗ, ಆರರಲಿ ಪ್ರಭವಿಸಿ ಆರಾರನತಿಗಳೆದ ಶುದ್ಧ ರೂಪ ಮೀರಿಪ್ಪ ಸೀಮೆಯಲಿ ತಾನೊಂದು ರೂಪಾಗಿ ತೋರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನ.