ವಚನ - 280     
 
ಎಂದಡೆ ಅವ್ವೆ ಅತ್ಯತಿಷ್ಯದ್ದಶಾಂಗುಲ ಆನಂದರೂಪ ತಾಳು, ಗುರುವಾಗಿ ಶುದ್ಧದಲ್ಲಿ ತಾನೆ ಬಂದು, ಸಿದ್ಧದಲ್ಲಿ ತಾನೆ ಬಂದು, ಪ್ರಸಿದ್ಧದಲ್ಲಿ ತಾನೆ ಬಂದು, ಎನ್ನ ಮನದ ಮಹಾಕಾಂಕ್ಷೆಯನು ಮಾಣಿಸಿ ಉರುತರ ತಾನೆ ಬಂದು, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಎನ್ನ ಮನದ ಮಸ್ತಕದಲ್ಲಿ ನೆಲೆಮನೆಯಾದ.