ವಚನ - 309     
 
ಎರಡೆಂಟು ಗ್ರಾಮದಲ್ಲಿ ಮಡಿದಿಪ್ಪ ಬ್ರಹ್ಮಾಂಡದತಿಶಯದ ಕುಳ ತಾನು ಸಮತೆ ರೂಪುಯೆನ್ನು ನೀ. ಸಮತೆಯನು, ಮುನ್ನಾದ ಸಮತೆಯನು ಮನ್ನಣೆಯ ಸಮತೆ ದ್ವಾದಶ ಗ್ರಾಮದ ಸೀಮೆ ಸಾಹಿತ್ಯದಲಿ ಸೋಮಪ್ರಭೆಯೊಂದರಲಿ ತಾಮಸಂವಾದಲ್ಲಿ ತನು ತನ್ನಯ ಗ್ರಾಮಸೀಮೆಯನರಿದು ನಿತ್ಯಸಾಯುಜ್ಯದಲಿ ಸಮತೆ ಸಾಯುಧನಾದೆನಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.