ವಚನ - 311     
 
ಎಲ್ಲರ ಎಲ್ಲ[0ತಲ್ಲ], ನಿನ್ನ ಪರಿ ಹೊಸತು. ಆ[ಕೆ] ಅನಾಹತ ಅಪರಸ್ಥಾನಕ್ಕೆ ಬಂದಡೆ ನೀನು ಪೂರ್ವಸ್ಥಾನಕ್ಕೆ ಬಪ್ಪಿ, ಆ[ಕೆ] ಪೂರ್ವಸ್ಥಾನಕ್ಕೆ ಬಂದಡೆ ನೀನು ದಕ್ಷಿಣಸ್ಥಾನಕ್ಕೆ ಬಪ್ಪಿ, ಆ[ಕೆ] ದಕ್ಷಿಣಸ್ಥಾನಕ್ಕೆ ಬಂದಡೆ ನೀನು ಪಂಚಮಸ್ಥಾನಕ್ಕೆ ಬಪ್ಪಿ, ಆ[ಕೆ] ಅನಾಹತ ಅಪರಸ್ಥಾನವನೆಯ್ದಲಾರದೆ ಇದ್ದಡೆ ಕೋಹಂ ನಿಚ್ಚಣಿಗೆಯನಿಕ್ಕಿಟ್ಟು, ಸಂಗಮಸ್ಥಾನಕ್ಕೆ ಸಂಯೋಗ ಪ್ರಾಪ್ತಿಯಂ ಮಾಡಿಸಿದೆ. ನಿನ್ನ ಸಂಯೋಗದ ಸುಖದಿಂದ ಸಂಪನ್ನೆಯಾಗಿ ಇಹಪರವೆಂಬುದನು ಏಕವ ಮಾಡಿದಳು. ಅವ್ವೆಯ ಕರುಣದಿಂದ ಎನಗೆ ಅರಿದಪ್ಪ ಆಧಿಕ್ಯವಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಗುರುವಿನ ಕರುಣದಿಂದ ಸದ್ಭಕ್ತಿಯನರಿದು ಸಕಲಯೋಗಕ್ಕೆ ಮೂಲನಾದೆನು.