ವಚನ - 319     
 
ಎಲ್ಲಿ ನೋಡಲು ತಾಯ ಕೊಂದವರೂಟ ಘನವಾಗಿದೆ. ಈ ಗುಣ ಹರಿವ ಹಕ್ಕೆಗೆ ಸಂಬಂಧವಿಲ್ಲ. ನಿಮ್ಮೂಟವಂ ಕಂಡವರೊಳರೆ ಚೆನ್ನಬಸವಣ್ಣನಲ್ಲದೆ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಿಡಿದ ಚೆನ್ನಬಸವಣ್ಣನಿಂದ ಸುಖವ ಕಂಡೆನು.