ವಚನ - 355     
 
ಐ ಬ್ರಹ್ಮದಿಂದತ್ತಲಾದ ಸೀಮೆಯ, ಆ ಸೀಮೆಯ ಮೀರಿದ ಸಂಬಂಧ, ಆ ಸಂಬಂಧ ಅಯ್ಯನ ರೂಪು, ಆ ಅಯ್ಯ ವಾಙ್ಮನಕ್ಕಗೋಚರನೆಂಬರು. ಆ ಅಯ್ಯ ಭಕ್ತ ಕಾರಣ ಪರಶಿವಮೂರ್ತಿಯೆಂದೆಂಬರು. ಆವುದು ಹುಸಿ? ಆವುದು ದಿಟ? ಈ ಉಭಯದ ಸಂಸಿದ್ಧವ ನಿನ್ನವರು ನೀವು ಬಲ್ಲಿರಿ, ಆನೇಕೆಂದರಿಯೆ ಕಪಿಲಸಿದ್ಧಮಲ್ಲಿಕಾರ್ಜುನಾ.