ವಚನ - 374     
 
ಒಬ್ಬ ಸಿದ್ಧಸಾಧಕ ಚಿಗರಿಯ ಸಾಕುತಲಿದ್ದಾನೆ; ಮತ್ತೊಬ್ಬ ಸಿದ್ಧಸಾಧಕ ಚಿಗರಿಯ ಮರಿಯ ಸಾಕುತಲಿದ್ದಾನೆ. ಆ ಸಿದ್ಧಸಾಧಕನ ನುಂಗಲು ಬರುತ್ತವೆ ಚತುರ್ದಶ ವ್ಯಾಘ್ರಂಗಳು. ನುಂಗಲು ಬಂದ ವ್ಯಾಘ್ರಂಗಳ ಚಿಗರಿಯು, ಚಿಗರಿಯ ಮರಿಯು ಹೊಡೆದುದ ಕಂಡು ನಾನಂಜಿ ಸಾಗರವ ಹೊಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.