ವಚನ - 397     
 
ಕಪ್ಪಿನ ಬಣ್ಣದಾಕೆ ಇಪ್ಪಿರವನರಿಯರು, ಆಬೆಯ ಕೈಯೊಳಗಾದರು, ಕೋಟಿ ಹರಿವಿರಂಚಾದಿಗಳು. ಗುರುವಾಜ್ಞೆಯಿಂದ ಅಯ್ಯನಪ್ಪ ಅಕ್ಷರದ್ವಯವನರಿದಡೆ ಆಬೆಯ ಕೈಗೆ ತಾವು ಹೊರಗಪ್ಪರು ಕಪಿಲಸಿದ್ಧಮಲ್ಲಿಕಾರ್ಜುನನ ಕಾಬರು.