ವಚನ - 403     
 
ಕರಣಂಗಳೆಲ್ಲವನು ಹದುಳದಿಂದವೆ ಬೆಳಗಿ ಕರುಣದಿಂದಿರಿಸಿದನು ತೂಗಿ ತೂಗಿ. ಕರಣಹರಣುಪಕರಣವಾಗಿಪ್ಪ ಗಿರ್ವಾಣ ಪದವನರಿದಾತ ಶ್ರೀ ಗುರು ಕಪಿಲಸಿದ್ಧಮಲ್ಲಿಕಾರ್ಜುನ.