ವಚನ - 404     
 
ಕರಣ ಕಂದೆರವುದನು ಆರಯ್ಯ ಅರಿವರು? ಕರಣೇಂದ್ರಿಯಂಗಳರತ ನಿತ್ಯರಲ್ಲದೆ. ನೆನಹಿನ ಬ್ರಹ್ಮಾಂಡವೊಳಕೊಂಡ ಸೀಮೆಯನು ತನು ಮಧ್ಯಕರದಲಿ ಕಂಡೆ. ಪ್ರಸಾದ ತ್ರೈಲಿಂಗವ ಮರಳಿ ಸಕಲಕ್ಕಾನೆ ನಿಷ್ಕಲಕೆ ನಿತ್ಯನೈ ಅಜಾತರೂಪ ಕಪಿಲಸಿದ್ಧಮಲ್ಲಿಕಾರ್ಜುನಾ.