ವಚನ - 405     
 
ಕರಣಾದಿ ಗುಣಗಳನು ಕಳೆಯಲೀಯದೆ ಕಳೆದು, ಹದುಳವಿರಿಸಿದ ಮನದ ಮಧ್ಯದಲ್ಲಿ. ತನುತ್ರಯದ ಮಲತ್ರಯವ ಅಜಲೋಕದಲು ಸುಟ್ಟು, ಹದುಳವಿರಿಸಿದ ಸಮತೆ ಸಂಗಮದಲಿ. ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರನ ನೆನೆಹ ತೋರುವ ಮುಕುರ ಸಮತೆ ರೂಪು.