ವಚನ - 433     
 
ಕಾಮ ಕಾಡಿತು, ಕ್ರೋಧ ಕೊಂದಿತು, ಆಮಿಷವೆನ್ನನೆಳೆವುತ್ತಿದೆ. ಕರುಣ ಮಾಡಾ ಹರಹರ ಮಹಾದೇವಾ, ಕರುಣ ಮಾಡಾ ಶಿವಶಿವ ಮಹಾದೇವಾ. ಕರುಣ ಮಾಡಾ ದೆಸೆಗೆಟ್ಟ ಪಶುವಿಂಗೊಮ್ಮೆ, ಕರುಣ ಮಾಡಾ ವಶವಲ್ಲದ ಶಿಶುವಿಂಗೊಮ್ಮೆ. ಕರುಣ ಮಾಡಾ ಅನ್ಯವನು ನಾನರಿಯೆ. ನಿಮ್ಮ ಪಾದವನುರೆ ಮಚ್ಚಿದೆನು, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ ತಂದೆ.