ವಚನ - 441     
 
ಕಾಯದ ಹೊರಕಣ್ಣ ಮುಚ್ಚಿ ಮನ ಭಾವದರಿವಿನೊಳಕಣ್ಣ ತೆರೆದು ಬಂದಾನೆಂಬ ಪರವಶಕ್ಕೆ ಕಿವಿಯಾಂತು ಕೇಳುತ್ತಿದ್ದೇನೆ. ಅದೆತ್ತಣಿಂದ ಸುಳಿದನೆಂದರಿಯೆನಯ್ಯಾ. ಅರುಹಿನ ನೇತ್ರಕ್ಕೆ ಶರ್ವನ ಪ್ರತಿಬಿಂಬ ಸೂಚಿಸಿ ಹೊಳೆದಡೆ ಕಣ್ದುಂಬಿ ನೋಡಿದೆ ಮನದುಂಬಿ ನೆನೆದೆ, ಆ ಪ್ರತಿಬಿಂಬವಿಡಿದು ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವೆನು.