ವಚನ - 473     
 
ಗಂಗೆಯ ಮುಳುಗಿ ಬಂದವರೆಲ್ಲಾ ಪಾಪವ ಮಾಡಿ ಸತ್ತಡೆ, ಅವರಿಗೆ ಪುಣ್ಯದ ಪದವಿಯುಂಟಾದಡೆ, ಗಂಗೆ ಘನವೆಂಬೆ, ಮುಳುಗಿ ಪಾಪವ ಮಾಡದೆ ಸತ್ತು ಹೋದಡೆ, ಪುಣ್ಯದ ಪದವಿಯವರಿಗುಂಟಾದಡೆ ಘನವೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.