ವಚನ - 482     
 
ಗುರುಗದ್ದಿಗೆಯ ಏರಿದಲ್ಲಿ ಭೇದವಿಲ್ಲೆಂಬರಿವು ಅಚ್ಚೊತ್ತಿದಡೆ, ಹೇಳುವೆ ಕೇಳಯ್ಯಾ; ಗುರುಗದ್ದಿಗೆಯಲ್ಲಿ ಹರಿವ ಮಶಕ ತಿಗುಣಿಗಳಿಗೆ ಅಭೇದವೊ ಭೇದವೊ? ಅಲ್ಲಿ ಭೇದಾಭೇದವೆಂಬ ಜ್ಞಾನವಿಲ್ಲ. ಇದು ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ಮನಕ್ಕೆ ಸೊಗಸದು, ಕೇಳಾ ಪ್ರಭುವೆ.