ವಚನ - 531     
 
ಜಲದ ಸಿಂಹಾಸನದ ಕೆಲದಲಷ್ಟಮ ಬೆಟ್ಟ ಕುಲಗಿರಿಗಳೆರಡು ಮತ್ತಿಕ್ಕೆಲದಲಿ. ನೆಲೆಯನರಿಯರು ಬ್ರಹ್ಮಕುಲವನರಿಯರು ಯೋಗ ಹೊಲಬುಗೆಟ್ಟರು ಯೋಗಸಿದ್ಧರೆಲ್ಲ. ಈರಾರನೊಂದೆಂದು ಹಿಡಿದಾತ ನಿಷ್ಕಲಯೋಗಿ ತಾ ಕಪಿಲಸಿದ್ಧಮಲ್ಲಿನಾಥ.