ವಚನ - 534     
 
ಜಲದೊಳಗೆ ಮತ್ಸ್ಯ ಜಲವ ತನ್ನ ನಾಸಿಕದತ್ತ ಹೊದ್ದಲೀಯದ ಪರಿಯ ನೋಡಾ ಅಯ್ಯಾ. ಶರಣ ಸರ್ವಪ್ರಪಂಚಿನೊಳಗಿದ್ದು ಆ ಪ್ರಪಂಚು ತನ್ನತ್ತ ಹೊದ್ದಲೀಯದ ಪರಿಯ ನೋಡಾ ಅಯ್ಯಾ. ಮತ್ಸ್ಯಂಗಾ ಬುದ್ಧಿಯ, ಶರಣಂಗೀ ಬುದ್ಧಿಯ ಕರುಣಿಸಿದೆಯಲ್ಲಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.