ವಚನ - 537     
 
ಜಾತಿ ವಿಜಾತಿಯ ನೀರ್ಗುಡಿಯ ಹೋದರೆ ಸುಡು ಹೋಗೆಂದು ನೂಂಕಿತ್ತೆ ಆ ಜಲವು! ಆ ಜಲದಂತಾಗಬೇಡವೆ ಹಿರಿಯರಾದವರು. ಎನ್ನ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವಾ.