ವಚನ - 551     
 
ತರ್ಕವನು ಮೀರಿಪ್ಪ ತತ್ವ ಕ್ರೀಯಾಗಿಪ್ಪ ಮತ್ತೆ ತ್ವಮಸಿಯ ಸೀಮೆ ಒಡಲಪ್ಪನೈ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯ ಮುಟ್ಟಿದ್ದ ಆರರ ಪರಿಯಿಂತುಟೈ. ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಕ್ರೀಯನು ಕೂಡಿದಾತ ನಾನು.