ವಚನ - 554     
 
ತಟ್ಟುವ ಮುಟ್ಟುವ ಭೇದವುಳ್ಳನ್ನಬರ ಶರಣನಲ್ಲ. ಅದೇನು ಕಾರಣವೆಂದಡೆ, ತಟ್ಟದೆ ಮುಟ್ಟದೆ ಕೊಂಬನಾಗಿ. ತಟ್ಟುವ ಮುಟ್ಟುವ ಭೇದಂಗಳೆಲ್ಲಾ ತನುಗುಣಕ್ಕೆ ದಾರಿ. ತಟ್ಟುವ ಮುಟ್ಟುವ ಬಟ್ಟಬಯಲಾಗಿ, ಕೊಂಬಾತನೆ ತತ್ವಮಸಿಯಾದ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.