ವಚನ - 553     
 
ತಟ್ಟುವ ಮುಟ್ಟುವ ಭೇದವನೊಲ್ಲ; ಅದೇನು ಕಾರಣ? ಐದಾರು ಪ್ರಸಾದದಲ್ಲಿ ಈರೈದು ಪಾದೋದಕದಲ್ಲಿ ಸಂಪನ್ನನಾಗಿ ಅವನ ಲಿಂಗತನುವೆನ್ನದಿರಿ ಕಂಡಿರೆ, ಅದು ಪ್ರಸಾದತನು. ಆತನ ಮಸ್ತಕದಲ್ಲಿ ಒಪ್ಪಿಪ್ಪ ಲಿಂಗದ ಗುಣದಿಂದ, ಆತನು ಲಿಂಗತನುವಾದನೈಸಲ್ಲದೆ ಆತನು ಸಾಕ್ಷಾತ್‍ಪ್ರಸಾದತನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.