ವಚನ - 562     
 
ತನ್ನ ಕಾರ್ಯಕ್ಕೆ ಹೋಗುತ್ತಲಿ ಅಡವಿಯಲಿ ಅಸ್ತಮಾನವಾಗೆ ಹಸಿದು ನಿಲಲಾರದೆ ಉಣಲಿಕ್ಕಿರವ್ವಾಯೆಂದು ಬೇಡಿದರೆ, ನೀನಾರಾತನಾರಾತನೆಂದರೆ ರೋಮರುಷ್ಟಿಯರತ್ಸಾತ್ರ[?] ನೋಡಯ್ಯ. ಇತ್ತ ಬಾರಯ್ಯಾ ಬಾರಯ್ಯಾ ಎಂದು ಕರೆದು ವೃಕ್ಷ ಭಿಕ್ಷವನಿಕ್ಕಿದುವು. ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಶರಣರ ಹೆಸರು ಕಲ್ಪವೃಕ್ಷ ನೋಡಯ್ಯಾ.