ವಚನ - 578     
 
ತನುಮಧ್ಯ ಮಂಟಪದ ಒಳಗೆ ದಾಯಂಗೊಳಿಸಿ ತನು ಮಲತ್ರಯವ ದಹಿಸಿ, ಜ್ಯೋತಿರ್ಮಯ ಲಿಂಗವನು ತನ್ನ ಮನದ ಕೊನೆಯಲ್ಲಿತ್ತ ಗುರು, ಅದ ನಿಸ್ತಾರವೆಂದು ಹಿಡಿದ, ಆದಿಯ ಇದಿರಲ್ಲಿ ಆಜ್ಞಾವಿಲೋಕನದ ಆನಂದ ಶಿಷ್ಯನು, ಅಪ್ರಮಾಣನವ್ವಾ ಕಪಿಲಸಿದ್ಧಮಲ್ಲಿಕಾರ್ಜುನ.