ವಚನ - 596     
 
ತರುಣ ಬೆಟ್ಟದ ನಡುವೆ ತಪಸಿ ಕುಳ್ಳಿದ್ದಹನೆ, ತರಗೆಲೆಗಳೂ ತನಗೆ ಆಧಾರವು. ಆದಿ ಆಧಾರ ಆಧೇಯ ಮುನ್ನಿಲ್ಲ ಮೂದೇವರಿಗೆ ದೀಕ್ಷಾಗುರು ತಾನೆಯಾಗಿ, ನಾನಾ ವಿಧದ ಗುಣದ ಸ್ವಾನುಭಾವದ ಮನೆಯ ಭಾನುವಿನ ಉದಯದಲಿ ವಿಕಸವಾಗಿ, ನಾನಾ ಗುಣರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದಾ ಸುಖತರದ ಅರೂಪುವಾಗಿ.