ವಚನ - 611     
 
ತಾತ್ಪರಿಯವೆಂಬ ಮನೆಯಲ್ಲಿ ಕರಣಂಗಳ ಬೆಳಗಿ ಆನಂದವೆಂಬಾತಂಗೆ ಭಕ್ತಿಮುಕ್ತ್ಯಂಗನೆಯರು ನಿಶ್ಚಲದಿಂದ ನಿತ್ಯಂಗೆ ಬೋನವ ಮಾಡುತೈದಾರೆ. ಆ ಬೋನ ಧ್ಯಾನಸಮಾಧಿಯ ಮೀರಿತ್ತು. ಅದೆ ನಿತ್ಯಚೊಕ್ಕರಸ[ವುಂಬ]ಯೋಗಿಗಳಿಗೆ ಯೋಗಕ್ಕೆ ನೆಲೆಯಾಗುತ್ತದೆ. ಬೀಜವು ತಾನೆ, ಓಗರವು ತಾನೆ, ತೃಪ್ತಿಯು ತಾನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವ ತತ್ವವು ತಾನೆ!