ವಚನ - 613     
 
ತುರಗವೆಪ್ಪತ್ತರ ಖುರಪಟದ ಘಲ್ಲಣಿಗೆ ಹರಿದು ಎಯ್ದಿತು ರೇಣು ಬ್ರಹ್ಮಾಂಡಕೆ ಬ್ರಹ್ಮಾಂಡದವರೆಲ್ಲ ತಮ್ಮೊಳಗೆ ಧೃತಿಗೆಟ್ಟು ತಮ್ಮ ಲೋಕದೊಳಿಪ್ಪ ಕೂಪ ಜಲದಾ, ಸೊಮ್ಮಿನೊಳು ಮತಿಗೆಟ್ಟು ನಿರ್ಮಳಜ್ಞಾನಿಯ ಸೊಮ್ಮು ತಾವಾದರೈ ಕಪಿಲಸಿದ್ಧಮಲ್ಲಿಕಾರ್ಜುನಾ.