ವಚನ - 614     
 
ತುರಿಯ ತುರಿಯದ ತವಕ ತವಕ, ಕರುಣಿ ಕರುಣಿ ನಿನ್ನ ಮನದ ಕೊನೆಯಲ್ಲಿ ಎನ್ನುವನಿರಿಸಾ ಸಂದು ಸವೆದು ಒಂದು ಮಾಡಾ ಅಯ್ಯ. ಎನ್ನ ಹಿಂದು ಮುಂದುವ ಕೆಡಿಸಾ ಆನಂದ ಶೂನ್ಯದಲ್ಲಿ ಆದಿ ಮಧ್ಯವಸಾನದಲ್ಲಿ ಶೂನ್ಯನನ್ನು ಮಾಡಿಸು ಕಪಿಲಸಿದ್ಧಮಲ್ಲಿನಾಥಯ್ಯ.