ವಚನ - 615     
 
ತೃಪ್ತವ ಮಾಡಿ ಮಾಡಿ ತನಗೆ ಬೇಕೆನ್ನ ಪ್ರಸಾದಿ, ಬಂದುದನತಿಗಳೆದು ಅಲ್ಲವೊಲ್ಲೆನೆನ್ನ ಪ್ರಸಾದಿ, ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಬಪ್ಪನೆಂಬ ರೂಪಿನಲ್ಲಿ ಲೋಪವ ಮಾಡಿದ ಪ್ರಸನ್ನ ಪ್ರಸಾದಿ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಬಸವಣ್ಣನು.