ವಚನ - 642     
 
ದೇವನಾನಂದದ ಭಕ್ತರ ನಿಲವ ಕೇಳಿರಯ್ಯಾ ಹರಿವ ನದಿಯ ತೆರನಂತೆ ಹರವಾಗಿಪ್ಪರಯ್ಯಾ ತಾವು ಮಾಡುವರಲ್ಲದೆ ಮಾಟದೊಳಗಿರರು ಕಪಿಲಸಿದ್ಧಮಲ್ಲಿಕಾರ್ಜುನಾ.