ವಚನ - 656     
 
ಧರೆ ದೆಸೆವಳಯವೆಲ್ಲ ತನಗಾದಡೂ ನಿಲ್ಲಳು. ಎನಿತು ತ್ರಿಭುವನ ರಾಜ್ಯ ಪದಂಗಳು ತನಗಾದಡೂ ನಿಲ್ಲಳು. ಅನಿತರೊಳು ತೃಪ್ತಿವಡೆಯಳು. ಈ ಆಸೆಯೆಂಬವಳಿಂದವೆ ನಿಮ್ಮಡೆಗಾಣದಿಪ್ಪೆನು. ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದಿಪ್ಪೆನೊ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.