ವಚನ - 719     
 
ನೀಲಕಂಧರನೆಂಬಾತ ಬಾಲತ್ವದಲ್ಲಿ ಭಾಮಿನಿಯ ಒಡಗೂಡಿ ಸಂದು ಸವೆದು, ಇದು ಕ್ರೀ ಇದು ನಿಃಕ್ರೀ, ಇದು ಶುದ್ಧ ಇದು ಸಿದ್ಧ ಇದು ಪ್ರಸಿದ್ಧ, ಇದು ಭಾವ ಇದು ನಿರ್ಭಾವವೆಂದು ಅರುಪುವಾಗ ಪಿಂಡಾಂಡಂಗಳಿಲ್ಲ; ಅಷ್ಟಮೂರ್ತಿ ಕೂಡಿದ ರುದ್ರನಿಲ್ಲ. ಆನಂದವೆ ಒಡಲಾಗಿಪ್ಪ ಮಹಾತ್ಮನ ನಿಜವ ಕಂಡಾತ ಬಸವಣ್ಣ. ಆ ಬಸವಣ್ಣನೆನಗರುಪಿದ ಗುಣದಿಂದ ಶುದ್ಧನಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನೆನ್ನ ಪರಮಾರಾಧ್ಯರು.