ವಚನ - 721     
 
ನುಡಿವಲ್ಲಿ ದೋಷವನಾರಿಸದೆ ಬಾಯಿಚ್ಛೆಗೆ ಬಂದಂತಾಡಿದಡೆ ಅದು ಹೆಮ್ಮೆಯಲ್ಲದೆ ಸಹಜಜ್ಞಾನವಲ್ಲ. ಅದೇನು ಕಾರಣವೆಂದಡೆ, ಪಾಷಾಣದ ಮೂರ್ತಿ ಘನವೆಂದಡೆ ಅಗ್ನಿಯಿಂದ ಭಂಗ. ಅಗ್ನಿ ಘನವೆಂದಡೆ ತೋಯದಿಂದ ಭಂಗ. ತೋಯ ಘನವೆಂದಡೆ ಮಾರುತನಿಂದ ಭಂಗ. ಮಾರುತ ಘನವೆಂದಡೆ ಬಯಲಿನಿಂದ ಭಂಗ. ಬಯಲು ಘನವೆಂದಡೆ ಅಂತಃಕರಣದಿಂದ ಭಂಗ. ಅಂತಪ್ಪಂತಃಕರಣ ಘನವೆಂದಡೆ ಮಾಯೆಯಿಂದ ಭಂಗ. ಮಾಯೆ ಘನವೆಂದಡೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ ಪರಬ್ರಹ್ಮದಿಂದ ಭಂಗ ಕೇಳಾ, ಮಡಿವಾಳ ತಂದೆ.