ವಚನ - 729     
 
ನೆರೆಮನೆಯ ಕೇರಿಯೊಳಗೆ ಗುರುಕರುಣ ಪಾತ್ರೆಯಲಿ ಹರುಷದಿಂದ ಭಿಕ್ಷವ ತಂದೆ ಅವ್ವಾ, ಕರಣ ಶುದ್ಧಮಾಡಿ ಉಣ್ಣ ಬಾರಾ. ನೆನಹಿನ ಗುಣದಲ್ಲಿ ಕರುಣ ಕಾನನದಲ್ಲಿ ತೆರಹುಗೆಟ್ಟು ಇದ್ದೆನು ಕಂಡಾ. ಕರುಣಾಕರನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನೆನಹಿನಲ್ಲಿ ಲೀಯವಾದೆನು.