ವಚನ - 728     
 
ನೆರೆದೆನು ನೆರೆದೆನು ಎಂಬಡೆ ನಾನೇನು ಎರವೆ? ಶ್ರೀಗುರುಸ್ವಾಮಿ ಎನ್ನ ನಿನ್ನ ನಿನ್ನನೆನ್ನ ಕರಸ್ಥಲದಲ್ಲಿ ಸ್ಥಾಪ್ಯಗೊಳಿಸಿದ ಬಳಿಕ, ಮಹಾಜ್ಯೋತಿರ್ಮಯದಲ್ಲಿ ತಮವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಪ್ರಸಾದವನೊಡಗೂಡಿದ ಬಳಿಕ, ಬೇರೆ ನಾನೊಂದು ನದಿಯೆನಲುಂಟೆ? ಪ್ರಭುವೆ.