ವಚನ - 744     
 
ಪಡೆವೆನೆಂಬ ದುಃಖದಿಂದ ಹಡೆದಡೆ ಕೈಕೊಂಬುದು ದುಃಖಕ್ಕೆಡೆಯಿಲ್ಲದೆ ಕಡು ದುಃಖವಪ್ಪುದು. ಈ ದುಃಖವ ಎಂದಿಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನಾ.