ವಚನ - 783     
 
ಪ್ರಾಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಕಲ್ಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಲಿ[ಖಿತ]ವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಇಂದಿನಿತು ಏಕೆ ಬಾರದು? ನಾನೇನು ಮಾಡುವೆನು ದೇವಾ! ಅಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ನಿನಗೆ ಕೂಪ ಅವಸ್ಥೆಯಲಿ ಪ್ರಾಣ ಬಿಡದು ಲಿ[ಖಿತ]ಬಾರದು ಎನ್ನನಿಂತಿರಿಸುವರೆ ಹೇಳೆಲೆ ದೇವಯ್ಯಾ.