ವಚನ - 821     
 
ಬೇಕು ಬೇಡೆನ್ನದೆ, ಸಾಕು ಸವಿಯೆನ್ನದೆ, ಆಕಾರವಿದು ತಾನು ಒಲ್ಲೆನೆನದೇಕೈಕ ರುದ್ರ ನಾನಾದೆನು ಎನ್ನದೆ, ಅನೇಕ ಪರಿಯಿಂ ಭಜಿಸು ಸಮತೆ ಪದವಾ. ಆ ಪದದ ಫಲದಿಂದ ನೀ ತಾನೆ ಅಪ್ಪೆಯೈ ಏಕೆ ಭ್ರಾಂತಪ್ಪೆಯೈ. ಗುರು ಕರುಣವು ತನ್ನ ಪದವನೆಯ್ದಿತ್ತು, ನಿನ್ನ ಭವನಾಶವನು ಮುನ್ನವೆ ಮಾಡೂದು ನಂಬು ಕಪಿಲಸಿದ್ಧಮಲ್ಲೇಶನಾ.