ವಚನ - 823     
 
ಬ್ರಹ್ಮ ಪೂಜಿಸುವ, ವಿಷ್ಣು ಪೂಜಿಸುವ, ಇಂದ್ರ ಪೂಜಿಸುವ, ರವಿ ಪೂಜಿಸುವ, ಚಂದ್ರ ಪೂಜಿಸುವ- ಅಂದಂದಿಂಗೆ ಬಂದ ಸುಖದುಃಖಗಳನುಣತಿಪ್ಪರು. ಅದು ಕಾರಣ, ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಪ್ರಸಾದಲಿಂಗ ಪ್ರಾಣಿಗಳಿಗೆ ಭವವಿಲ್ಲ, ಸಂದಿಲ್ಲ ; ಇದು ನಿಶ್ಚಯ, ನಂಬು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ.