ವಚನ - 910     
 
ಮುನ್ನಾದಿಯಲ್ಲದ ಸನ್ನುತದ ಶಿವಲಿಂಗ ಇನ್ನು ವಾದಿಸಿದ ವಾದಂಗಳಿಂದ ಎನ್ನ ಮನ ಕರವನರುಹದಲ್ಲಿ ತನ್ನ ಪದ ಬೆಳಗಿಸುವ ಉನ್ನತೋನ್ನತ ಗುರು ಚೆನ್ನಬಸವಣ್ಣನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.