ವಚನ - 911     
 
ಮುನ್ನಾದಿಯಲಿ ಆದ ಸನ್ನುತದ ವಸ್ತುವನು ಬಿನ್ನಾಣದಿಂದಲದ ತಂದುಕೊಡಲು, ಇನ್ನಿದನು ಇರಿಸಲ್ಕೆ ಠಾವಾವುದೆಂದು ಮನ ತನ್ನಮಯ ಮಾಡಿದಾ ರಾಜನ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.