ವಚನ - 915     
 
ಮೂರ್ತಿ ಮೂಲಕ್ಕೆ ತಾನೆ ಮುಖ್ಯನಾದಾತ, ಸಕಲಕ್ಕೆ ತಾನೆ ಕಾರಣಿಕನಾದಾತ, ಸರ್ವವನೂ ತನ್ನೊಳಗಡಗಿಸಿ ಮೀರಲೀಯದಾತ. ಆತನು ಅಜ್ಞಾತನೆಂಬೆ, ಆತನು ಶರಣನೆಂಬೆ, ಆತನು ಸಕಲನಿಷ್ಕಲ ಪರಿಪೂರ್ಣನೆಂದೆಂಬೆ, ಅಚ್ಚಲಿಂಗೈಕ್ಯನೆಂದೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಾನೆಂಬೆ.