ವಚನ - 928     
 
ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ, ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯಲಿ, ತನುವಿನ ಮಂಟಪದ ಘನ ಮಸ್ತಕದಲ್ಲಿಪ್ಪ ಹೊಂಗಳಸದಾ ಮೂರು ಮತ್ತೊಂದಾಗಿ ಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿ ಮೀರಿನಿಂದಾ ತ್ವಮಸಿ ಕಪಿಲಸಿದ್ಧಮಲ್ಲಿನಾಥನ ಸಾರಹೃದಯನ ಭಕ್ತಿ ಫಲವಿಂತುಟು.