ವಚನ - 927     
 
ಮೂರು ಮಠ ಮೂವತ್ತು ಆರಾಗಿ ತೋರುತಿದೆ ಮೀರಿಪ್ಪ ಬೊಮ್ಮ ತಾ ಹಮ್ಮಡರಿತು. ಮಠವು ತಾನೊಂಬತ್ತು ಕುಟಿಲವು ಹಲವಾಗಿ ನಿಟಿಲನೇತ್ರನ ರೂಪು ಅಜಲೋಕದಾ ಸಾದಾಖ್ಯ ದೇಹವಾರಾರು ಹೊಗಲಿಲ್ಲೆಲ್ಲಿ ಮೂವರಿಗೆ ತಾನು ಶಕ್ಯವಲ್ಲ. ನಾದ ಬಿಂದು ಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ ಆದ್ಥಿಕ್ಯವನರಿವ ಯೋಗಿ ಯಾರು?