ವಚನ - 931     
 
ಮೃದು ರುಚಿ ರೂಪು ಕೂಡಿ ಸಕ್ಕರೆಯಾಯಿತ್ತು. ಗುರು ಲಿಂಗ ಜಂಗಮ ಕೂಡಿ ವಸ್ತುವಾಯಿತ್ತು. ಮೃದುವಿನಂತೆ ಗುರು, ರುಚಿಯಂತೆ ಲಿಂಗ, ರೂಪಿನಂತೆ ಜಂಗಮ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.