ವಚನ - 958     
 
ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಬ್ರಹ್ಮ ವಿಷ್ಣ್ವಾವದಿಗಳು ಲಿಂಗಾರ್ಚನೆಯ ಮಾಡಿ ಭವಕ್ಕೆ ಬಂದುದನರಿಯಾ. ಬಸವಣ್ಣ ಮೊದಲಾದ ಪುರಾತರೆಲ್ಲ ಪ್ರಸಾದಲಿಂಗವ ಗ್ರಹಿಸಿ ಸಂದಿಲ್ಲದ ಕೂಟವ ಮಾಡಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.