ವಚನ - 1088     
 
ಸುಚಿತ ಕರದಲಿ ಗುರುವ ಪ್ರಾಣಾಂತದಲಿ ಚರವ ಭೇದಾದಿ ಭೇದದಲಿ ಶುದ್ಧಲಿಂಗವ ಮಾಡಿ ಏಕಏಕವೆಂದು ಅರ್ಚಿಸಿ ಪ್ರಸನ್ನ ಪ್ರಸಾದವ ಕೊಂಡು ಗುರುವಿನ ಪೂರ್ವಾಶ್ರಮವ ಕಳೆದ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.