ವಚನ - 1098     
 
ಸೋಹಂ ಪದಾಜ್ಞೆಯಲಿ ಆನತವನರುಹಿಸದೆ ದಾಸೋಹಮಿತಿ ಸಂಗಮದೊಳತಿಭಕ್ತಿಯಿಂ ಆನಂದ ಬ್ರಹ್ಮಲೋಕವ ಲೋಕಿಸಿದಿರೆನ್ನ ಚೇತನವು ಸಕಲಕ್ಕೆ ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.